ಶುಕ್ರವಾರ, ಸೆಪ್ಟೆಂಬರ್ 4, 2020

ಅಮ್ಮ ತೋರಿಸುವ ಜಗದ ಯಾತ್ರೆ

 ಅಮ್ಮ ತೋರಿಸುವ ಜಗದ ಯಾತ್ರೆ.

ಅಜ್ಜ ಅಜ್ಜಿಯ ಹೇಳುವ ಕಥೆ ನೀವು ಕೇಳಿರಬಹುದು. ಮಕ್ಕಳಾಗಿದ್ದಾಗ ನಾವು ಅವನ್ನು ಕೇಳಿ ಆನಂದ ಪಟ್ಟಿದ್ದೇವೆ ನಿಜ. ಆದರೆ ಅಜ್ಜ ಅಜ್ಜಿ ಕಥೆ ಹೇಳ್ತಾರೆ ಅಷ್ಟೇ ಕೃತಿಯಲ್ಲಿ ಅವರ ಕಥೆಗಳನ್ನು ಕಾಣುವುದು ಕಡಿಮೆ.ಯಾಕಂದ್ರೆ ವಯಸ್ಸಾಗಿರ್ತದೆ, ಶುಗರು ಬಿಪಿ-ಪಾಪಿ ....ಅಂತ ರೋಗಗಳು ಬೇರೆ ಇರುತ್ತವೆ. ಹಾಗಾಗಿ ಅವರಿಂದ ನಾವು ಕೇಳಬಹುದಷ್ಟೆ.

ಶಬ್ದಗಳು ಪರಿಚಯವಾಗಿ ಅವನ್ನು ಮಸ್ತಕದಲ್ಲಿ ಹದ ಮಾಡಿ ಹಾಳೆಯ ಮೇಲೆ ಸಾಲು ಸಾಲಾಗಿ ಇಳಿಸುವ ತಿಳುವಳಿಕೆ ಬಂದಾಗ ನಾವು ಜಗವನ್ನ ತಿಳಿಯಲು ತಿಳಿದುಕೊಳ್ಳುತ್ತಾ ಮುಂದೆ ಸಾಗುತ್ತೇವೆ. ಹೀಗೆ ನಾನು ಕೂಡಾ ಸಾಗುತ್ತಾ ಯೋಚಿಸುತ್ತಿರುವಾಗ ನನಗೆ ಹೊಳೆದಿದ್ದೇ 'ಅಮ್ಮ ತೋರಿಸುವ ಜಗದ ಯಾತ್ರೆ' .


ನಮ್ಮೆಲ್ಲರ ಅಮ್ಮ ಕಥೆ ಹೇಳದಿರಬಹುದು ಆದರೆ ಕೃತಿಯಲ್ಲಿ ನಮಗೆ ತೋರಿಸುತ್ತಾಳೆ . ನಾವೆಲ್ಲರೂ ಈ ಜಗದಾ ಜೀವಯಾತ್ರೆ ಬರಿಯ ಮೂರೇ ದಿನ... ಅಂತ ಹಾಡಿನ ಮೂಲಕ,ಯಾರೋ ಬರೆದಿದ್ದನ್ನು ಓದಿ  , ಅಥವಾ ಅಜ್ಜ ಅಜ್ಜಿ ಹೇಳಿರುವ ಕಥೆಯಲ್ಲಿ ಕೇಳಿ ತಿಳಿದಿರಬಹುದು. ಆದರೆ ಅಮ್ಮ ಇದನ್ನ  ಪ್ರತ್ಯಕ್ಷವಾಗಿ ದಿನಾಲು ಮಾಡಿ ತೋರಿಸುವಳು. ಒಂದು ದಿನ ನಿಮ್ಮ ಕೆಲಸಗಳನ್ನು ಸ್ವಲ್ಪ ಹೊತ್ತು ಬದಿಗಿಟ್ಟು ಅಮ್ಮ ಚಪಾತಿ ಅಥವಾ ಭಕ್ರಿ(ರೊಟ್ಟಿ) ಮಾಡುವಾಗ ಅವಳ ಮುಂದೆ ಹೋಗಿ ಕುಳಿತುಕೊಳ್ಳಿ . ಅಮ್ಮನ ಎರಡು ಕೈಗಳನ್ನು ಸೃಷ್ಟಿಕರ್ತನ ಕೈ ಎಂದುಕೊಳ್ಳೋಣ ,ಅವಳ ಕೈಯಲ್ಲಿ ತಯಾರಾಗುವ ಚಪಾತಿ/ಭಕ್ರಿ ನಾವು ನೀವೆಂದುಕೊಳ್ಳೋಣ. ಮೊದಲು ಒಂದು ಪರಾತಿನಲ್ಲಿ ಹಿಟ್ಟನ್ನು ಹಾಕಿಕೊಂಡು ನೀರನ್ನು ಹಾಕಿ ಹದ ಬರುವವರೆಗೂ ನಾದುತ್ತಾಳೆ. ನಾದಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡುತ್ತಾಳೆ . ನಂತರ ಒಂದೊಂದರಂತೆ ಉಂಡೆಯನ್ನು ತೆಗೆದುಕೊಂಡು ಚಪಾತಿಯಾದರೆ ಲಟ್ಟಣಿಗೆಯಿಂದಲೋ ರೊಟ್ಟಿಯಾದರೆ ಕೈಯಿಂದಲೋ ತಟ್ಟುತ್ತಾಳೆ. ತಟ್ಟಿ ಗೋಲಾಕಾರದ ರೂಪದಲ್ಲಿ ಹಂಚಿನ ಮೇಲೆ ಹಾಕಿ ಬೇಯಿಸುತ್ತಾಳೆ . ಅಲ್ಲಲ್ಲಿ ಚಪಾತಿ /ರೊಟ್ಟಿಗೆ ಕಪ್ಪು ಚುಕ್ಕೆಗಳಿದ್ದರೇ ಅದು ಬೆಂದಿದೆ ಅಂತ ಅರ್ಥ , ಆಮೇಲೆ ಆ ಚಪಾತಿ/ ರೊಟ್ಟಿಗೆ ಪಲ್ಲೆಯೊಡನೆ ಬೆರೆಯುವ ಸಂಭ್ರಮ, ಆ ಪಲ್ಯೆಯ ಕಥೆ ಬೇರೆ. ಬೆರೆತಮೇಲೆ ತಿನ್ನುವವನ ಅರಿದು ರುಚಿಯ ಬಗೆ ತಿಳಿಸುವದು. ಇದು ಚಪಾತಿ /ರೊಟ್ಟಿಯ ಯಾತ್ರೆ.

ಈಗ ಮೊದಲೇ ಹೇಳಿದಂತೆ ಅಮ್ಮನ ಕೈಗಳು ಸೃಷ್ಚಿಕರ್ತನ ಕೈಗಳು ನಾವು ಸೃಷ್ಚಿಕರ್ತನ ಕೈಯಲ್ಲಿ ತಯಾರಾಗುವ ರೊಟ್ಟಿ /ಚಪಾತಿ . ಸೃಷ್ಟಿಕರ್ತ ನಮ್ಮನ್ನು ಚೆನ್ನಾಗಿ ನಾದಿ ಹದ ಮಾಡಿ ತಟ್ಟಿ ರೂಪ ಕೊಟ್ಟು ಬೇಯಿಸಿ ಈ ಭೂಮಿಗೆ ನಮ್ಮನ್ನು ಬಿಡುತ್ತಾನೆ. ಆ ಕಪ್ಪು ಚುಕ್ಕೆಗಳು ಅತಿಯಾಗಿ ಬೆಂದು ಕಲಿತ ಪಾಠಗಳಿರಬಹುದು/ ಎಲ್ಲರಲ್ಲಿ ದೋಷವಿರುವುದು ಸಹಜ ಎಂದು ತೋರಿಸುವದು, ಪಲ್ಯದೊಡನೆ ಬೆರೆಯುವ ಸಂಭ್ರಮವೆಂದರೆ ಅದೇ ಎಲ್ಲರಿಗೂ ಉಂಟು ಬ್ರಹ್ಮಗಂಟು ಎನ್ನುತ್ತಾರಲ್ಲಾ ಆ ಹೆಣ್ಣಿನೊಡನೆ ಬೆರೆಯುವ ಸಂಭ್ರಮ/ ಸ್ನೇಹಿತರೋ, ವಿದ್ಯಾವಂತರು ,topper's, ಸಂಗವಿರಬಹುದು ಅಥವಾ ಯಾವುದಾದರೂ ಇರಬಹುದು ಇವರೊಡನೆ ಬರೀ ಬೆರೆಯುವದಲ್ಲಾ , ಅರಿತು ಬೆರೆತು ಜೀವನಯಾತ್ರೆ ಮುಗಿದಾಗ ,ಹೇಗೆ ತಿನ್ನುವವ ಇದು ರುಚಿಯಿತ್ತೋ ಇಲ್ಲವೋ ಎಂದು ಹೇಳುತ್ತಾನೋ ಅದೇ ರೀತಿ ದೇವರು ನಮ್ಮ ಜೀವನದ ಫಲಿತಾಂಶ ತಿಳಿಸುತ್ತಾನೆ.

ಇದನ್ನೂ ನೀವೂ..ಗಮನಿಸಿರಬಹುದು , ನನ್ನ ಗಮನಕ್ಕೆ ಬಂದಿದ್ದರಿಂದ ಬರೇದಿದ್ದೇನೆ ಅಷ್ಟೇ. ಇದು ಅನಂತನ ಜಗತ್ತು ಇಲ್ಲಿ ತಿಳಿಯುವದು ಕೂಡ ಅನಂತವೇ.ಆದರೇ ಅನಂತನ ಸಾಮ್ರಾಜ್ಯದಲ್ಲಿ ಮನುಷ್ಯ ರೂಪದಲ್ಲಿ ನಮ್ಮದು ಅಲ್ಪಯಾತ್ರೆ. ಅದರಲ್ಲೂ ವಿಧ ವಿಧವಾದ ವಿಘ್ನಗಳು ಬರುವುದುಂಟು ಅವಗಳೊಂದಿಗೆ ಜೀವನ ನಡೆಸಿ ಬದುಕಿಗೊಂದು ಅರ್ಥ ಕೊಡಬೇಕು.
ಈ ಜಗದೊಳಗೆ ಅಮ್ಮ ಎಂಬ ಜಗತ್ತು ಇಟ್ಟು ಅಮ್ಮ ಎಂಬ ಜಗತ್ತು ತೋರಿಸುವ ಹತ್ತಾರು ಜಗತ್ತುಗಳು ಈ ಮುಗಿಯುವ ಜಗದೊಳಗೆ ಅನಂತ ಜಗಗಳು. ಈ ಅನೇಕ ಜಗಕ್ಕೆ ಅನಂತನೇ ನಮಗೆ 'ಬಾಳಿಗೊಂದು ನಂಬಿಕೆ' ಕೊಡುವವ. ಹೀಗೆ ನನ್ನಂತವರಿಗೆ ಬರೆಯಲು ಪ್ರೇರಿಸುವವ ಅವನೇ ..ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಬರಿ ಗೀಚು ಗೀಚು ಅಂತಾನೆ.

ಕಡೆಯದಾಗಿ ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶಿರ್ವದಿಸಿ.

-HRK💜

2 ಕಾಮೆಂಟ್‌ಗಳು:

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...