ಸೋಮವಾರ, ಮಾರ್ಚ್ 7, 2022

 ಸದ್ದಿಲ್ಲದೇ ಪಸರಿಸುತ್ತಿದೆ ವಿಚ್ಛೇದನ ಎಂಬ ಮಾರಿ!


ಸುಂದರ ವೈವಾಹಿಕ ಬದುಕು ಯಾರಿಗೆ ಬೇಡ ಹೇಳಿ? ಆದರೆ ಇತ್ತೀಚಿನ ಬೆಳವಣಿಗೆ ನೋಡುತ್ತಾ ಹೋದರೆ ವಿಚಿತ್ರ ವಿಚಿತ್ರ ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲಿ ಕೌಟುಂಬಿಕ ಜೀವನಕ್ಕೆ ಛೇದ ಎಂಬಂತೆ ವಿಚ್ಛೇದನ ಸಮಸ್ಯೆ ಉಲ್ಬಣಿಸುತ್ತಿದೆ ! ಹಿಂದೆ ಒಂದು ಲೇಖನದಲ್ಲಿ ಹೇಳಿದ್ದೆ ಒಂದು ಕಾಫಿಗೂ,ಒಂದು ಸಹಿಗೆ ಕೂಡ ಡಿವೋರ್ಸ ಕೊಟ್ಟವರಿದ್ದಾರೆಂದು. ಈ ವಿಷಯದ ಮೇಲೆ ಮತ್ತೊಮ್ಮೆ ಬರೆಯಲು ನನಗೆ ಮನಸ್ಸಿರಲಿಲ್ಲ ,ಆದರೆ ಇತ್ತೀಚಿನ ಒಂದು ಘಟನೆ ಕೇಳಿ ಬಹಳೇ ನೋವಾಯಿತು. ಅದಕ್ಕೆ ಮತ್ತೊಮ್ಮೆ ಬರೆಯಲು ಅಣಿಯಾದೆ . ಬನ್ನೀ ಅದೇನೂ ಅಂತ ತಿಳಿಯೋಣ !


ಬಿ.ಆರ್.ಚೋಪ್ರಾ ಮಹಾಭಾರತ ಕೃಷ್ಣ ಪಾತ್ರದ ಖ್ಯಾತಿಯ ಶ್ರೀನಿತೀ಼ಶ ಭಾರದ್ವಾಜ ಅವರಿಂದ ಅವರ ಪತ್ನಿ ಸ್ಮಿತಾ ವಿಚ್ಛೇದನ ಪಡೆದದ್ದು. ಇಬ್ಬರೂ ದೊಡ್ಡ ಹುದ್ದೆಯಲ್ಲಿದ್ದವರು. ಈರ್ವರೂ 20 ವರ್ಷಗಳ ಜೀವನ ನಡೆಸಿದ್ದಾರೆ ಈ ದಂಪತಿಗಳಿಗೆ ಇಬ್ಬರು ಅವಳಿ-ಜವಳಿ ಮಕ್ಕಳು ಬೇರೆ . ಆದರೆ ಇಲ್ಲಿಯವರೆಗೆ ವಿಚ್ಛೇದನ ಕಾರಣ ತಿಳಿದು ಬಂದಿಲ್ಲ. ಇವರ ಹೊರತಾಗಿ ಸಮಂತಾ ಮತ್ತು ನಾಗಚೈತನ್ಯ ,ನಟ ಧನುಷ್‌ ರವರ ವಿಚ್ಛೇದನಗಳು. ಯಾಕೆ ಇವರ ಉದಾಹರಣೆ ಎಂದರೆ ಇವರು ನಮ್ಮ ನೆಚ್ಚಿನ ನಾಯಕ-ನಾಯಕಿಯರಲ್ಲವೇ , ಇವರು ಮಾಡುವುದೆ ನಾವು ಅನುಕರಿಸುವುದಿಲ್ಲವೇ? ವಿಚ್ಛೇದನಲ್ಲಿ ಸುಖವಿದೆ ಅಂತ ತಿಳಿದು ಹಾಸ್ಯಾಸ್ಪದ ಕಾರಣಗಳನ್ನು ಕೊಟ್ಟು ವಿಚ್ಛೇದನ ಪಡೆಯುತ್ತಿದ್ದಾರೆ ನಮ್ಮ ಜನ . ಇದರ ಸಲುವಾಗಿಯೆ ಎಷ್ಟೋ ಪ್ರಾಣಹಾನಿಯಾಗಿವೆ  , ಆಗುತ್ತಿವೆ. ಸಕಲ ಚರಾಚರ ವಸ್ತುಗಳಲ್ಲಿ ಬಹಳ ಬುದ್ಧಿವಂತ ಅನ್ನಿಸಿಕೊಂಡವರು ನಾವೇ ಹೀಗೆ ಮಾಡಿದರೆ ಹೇಗೆ? ಇದನ್ನು ತಡೆಯಬೇಕಲ್ಲವೇ?

ಹಾಗಿದ್ದರೇ ತಡೆಯವರು ಯಾರು ? ನಾಂದಿ ಹಾಡಿದವರೇ ತಡಯಬೇಕು ಅಂದರೆ ನಾವೇ ತಡೆಯಬೇಕು. ಚಿಕ್ಕವನಿದ್ದಾಗ ಒಮ್ಮೆ ಶ್ರೀಸತ್ಯಾತ್ಮತೀರ್ಥರ ಪ್ರವಚನದ ಮಾತು ನನ್ನ ಕಿವಿಗೆ ಬಿದ್ದಿತ್ತು , ಅದೇನೆಂದರೆ ʼ ಮನೆಯಲ್ಲಿ ಒಬ್ಬ ಅಜ್ಜ ಅಜ್ಜಿ ವಾಕಿಂಗ ಹೋಗುವ ಚಿತ್ರವನ್ನ ಗೋಡೆಯ ಮೇಲೆ ತೂಗು ಹಾಕಿ ,ದಿನಾಲು ಆ ಚಿತ್ರವನ್ನ ನೋಡಿ ಯೋಚಿಸಿ ಅವರು ಇಷ್ಟು ವಯಸ್ಸಾದರು ಇನ್ನು ಜೊತೆಗೆ ಇದ್ದಾರಲ್ಲ ಎಂದು?,  ಅದ್ಭುತವಲ್ಲವಾ ಇದು? ಯಾಕೆಂದರೆ ಅವರಿಗೆ ಗೊತ್ತು ʼ ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ ʼ ಅಂತ ಅವುಗಳನ್ನ ಎದುರಿಸಿ ಬದುಕುತ್ತಿರುವವರು ಅವರು. ಅಜ್ಜ-ಅಜ್ಜಿ ಹೇಳುಔ ಕಥೆ ಕೇಳದೆ ಇರಬಹುದು ನಾವು ಆದರೆ ಅಜ್ಜ-ಅಜ್ಜಿಯ ಗಟ್ಟಿ ಜೀವನ ನಮ್ಮ ಧ್ಯೇಯವಾಗಲಿ. ಅಜ್ಜ-ಅಜ್ಜಿಯ ಬದುಕೇ ನಮಗೆ ಬಾಳಿನಲ್ಲಿಯೂ ನಂಬಿಕೆ ಬರಿಸಲಿ ಅಂತ ಹೇಳಿ, ಅದೇನೇ‌ ಗ್ರಾಮರ್ ಮಿಸ್ಟೇಕ ಇದ್ರು ಆಶೀರ್ವದಿಸಿ. 


-ಯತ್ಸಾರಭೂತಂ ತದುಪಾಸನೀಯಂ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...